India,IMF AND WORLD BANK

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ವೈ ವಿ. ರೆಡ್ಡಿಯವರ "ADVICE AND DISSENT" ಪುಸ್ತಕದಲ್ಲಿನ ಕೆಲವು ಭಯಾನಕ ಸತ್ಯಗಳು...
ಅವರೆನ್ನುತ್ತಾರೆ...
ಕಾಂಗ್ರೆಸ್ಸಿನ ದುರಾಡಳಿತದ ಅವಧಿಯಲ್ಲಿ ನಾವು 47 ಟನ್ ಬಂಗಾರವನ್ನು ಕೇವಲ 40 ಕೋಟಿ $ಗೆ ಅಡವಿಟ್ಟು ಸಾಲ ಪಡೆದಿದ್ದೆವು..! 😭
ಇದು ಅಂದಿನ ಭಾರತದ ಆರ್ಥಿಕ ದುಸ್ಥಿತಿಯಾಗಿತ್ತು. 90ರ ದಶಕದ ಆರಂಭದ ದಿನಗಳಲ್ಲಿ ಭಾರತದಂತಹ ಒಂದು ಬೃಹತ್ ರಾಷ್ಟ್ರವು ತನ್ನ ಬಳಿಯಿದ್ದ ಚಿನ್ನವನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿತ್ತು.
ರಾಜೀವ್ ಗಾಂಧಿಯ ಆಳ್ವಿಕೆಯಲ್ಲಿ ದೇಶದ ಖಜಾನೆ ಖಾಲಿಯಾಗಿತ್ತು & LTTE ಉಗ್ರರ ದಾಳಿಯಲ್ಲಿ ಅವರ ಹತ್ಯೆ ನಡೆದುಹೋಯಿತು. ಅದಾದ ನಂತರ ಚಂದ್ರಶೇಖರ್ ಪ್ರಧಾನಿಯಾದರು. ಆದರೆ ತಿಜೋರಿ ಬರಿದಾಗಿದ್ದರಿಂದ. ಅವರಿಗೆ ಬಹಳ ಆತಂಕವಾಯಿತು. ಏನು ಮಾಡಬೇಕೆಂಬುದೇ ಅವರಿಗೆ ತೋಚಲಿಲ್ಲ.
ವೈ.ವಿ. ರೆಡ್ಡಿಯವರು ಬರೆಯುತ್ತಾರೆ, ಇದರಿಂದಾಗಿ ಇಡೀ ದೇಶದಲ್ಲಿಯೇ ಆಗ ಬಹಳ ಹತಾಶ ವಾತಾವರಣ ಮುಸುಕಿತ್ತು.
ಉದ್ಯೋಗ ಸೃಷ್ಟಿಗಾಗಿ ರಾಜೀವ್ ಗಾಂಧಿ ಯಾವ ಯೋಜನೆಗಳನ್ನೂ ಮಾಡಿರಲಿಲ್ಲ. ನೂತನ ಪ್ರಧಾನಿ ಚಂದ್ರಶೇಖರ್‌ರವರು ಹೊಸ ಉದ್ಯಮ ಶುರು ಮಾಡುವುದೆಂದರೂ ಅಷ್ಟು ಸುಲಭವಿರಲಿಲ್ಲ; ಉದ್ಯಮ ಕ್ಷೇತ್ರಕ್ಕೆ ಬರಬೇಕಾದರೆ ಐವತ್ತು ಕಡೆಯಿಂದ NOC ತರಬೇಕಿತ್ತು ಕಾಂಗ್ರೆಸ್‌ನವರ ಲೈಸೆನ್ಸ್ ಪರ್ಮಿಟ್ ನಿಯಮಗಳ ಸುಳಿಯಲ್ಲಿ ಇಡೀ ವ್ಯವಹಾರಕ್ಷೇತ್ರ ತನ್ನ ಉತ್ಸಾಹವನ್ನು ಕಳೆದುಕೊಂಡು ನಿರಾಶಾವಾದಿಯಾಗಿ ಹೋಗಿತ್ತು. ಇನ್ನೊಂದೆಡೆ, ಮಂಡಲ್ ಹೋರಾಟ, ಇತ್ಯಾದಿಗಳು ದೇಶದ ತುಂಬಾ ಹರಡಿದ್ದವು.
1980 ರಿಂದ 1990 ರವರೆಗೆ, ಕಾಂಗ್ರೆಸ್ ಸರ್ಕಾರವು ಆರ್ಥಿಕತೆಗೆ ಪೂರ್ಣ ವಿರಾಮ ಹಾಕಿ ಕುಳಿತಿತ್ತು. ಅದೇ ಹೊತ್ತಿನಲ್ಲೇ ಬೊಫೋರ್ಸ್ ದಲ್ಲಾಳಿ ಹಗರಣ ಬಯಲಿಗೆ ಬಂತು.
ವೈ.ವಿ. ರೆಡ್ಡಿಯವರು ಹೇಳುವಂತೆ ಗಾಂಧಿ ಕುಟುಂಬದವರು ಎಗ್ಗಿಲ್ಲದೆ ದೇಶವನ್ನು ಲೂಟಿ ಹೊಡೆದು, ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಲುಪುವಂತೆ ಮಾಡಿದ್ದರು. ಆ ದಿನಗಳಲ್ಲಿ ಭಾರತದ ವಿದೇಶ ವಿನಿಮಯ ನಿಧಿ ಎಷ್ಟು ಕಡಿಮೆ ಇತ್ತೆಂದರೆ, ನಮ್ಮ ದೇಶದ ರಿಸರ್ವ್ ಬ್ಯಾಂಕು ತನ್ನಲ್ಲಿದ್ದ ಚಿನ್ನವನ್ನು ವಿಶ್ವ ಬ್ಯಾಂಕಿನಲ್ಲಿ ಒತ್ತೆ ಇಡಬೇಕಾದ ತೀರ್ಮಾನಕ್ಕೆ ಬಂದಿತ್ತು.
ಅಂದಿನ ಪರಿಸ್ಥಿತಿ ಹೇಗಿತ್ತೆಂದರೆ, ನಮಗೆ ಸಾಲವಾಗಿ ಬರಲಿದ್ದ ಹಣದ ಮೌಲ್ಯ ನಮ್ಮಲ್ಲಿನ ಕೇವಲ 15 ದಿನಗಳವರೆಗಿನ ರಿಸರ್ವ್ ಮೌಲ್ಯಕ್ಕೆ ಸಾಕಾಗುವಷ್ಟಿತ್ತು. ಆಗ ಪ್ರಧಾನಿ ಚಂದ್ರಶೇಖರ್ ಅವರ ಆಜ್ಞೆಯಂತೆ, ಭಾರತವು ತನ್ನಲ್ಲಿದ್ದ 47 ಟನ್ (47,000 K.G.) ಬಂಗಾರವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಬಳಿಯಲ್ಲಿ ಒತ್ತೆ ಇಡಲು ಒಪ್ಪಿಕೊಂಡಿತು.
ಬಹಳ ಆಶ್ಚರ್ಯಕರವೂ, ಮುಜುಗರ ತರುವಂಥದ್ದೂ ಆಗಿದ್ದ ಈ  ಘಟನೆಯು ಪತ್ರಿಕೆಗಳಲ್ಲೂ ವರದಿಯಾಯಿತು. ಆಗಿನ ಆ ಸಂದರ್ಭದಲ್ಲಿ ಈಗಿನಂತೆ ಮೊಬೈಲ್‌ಗಳಾಗಲಿ, ಇಂಟರ್ ನೆಟ್ ಆಗಲೀ ಇರಲಿಲ್ಲ. ಲ್ಯಾಂಡ್ ಲೈನ್ ಫೋನು ಇದ್ದರೂ ಕೂಡಾ ಬಹಳ ಮಿತವಾಗಿ ಬಳಕೆಯಲ್ಲಿತ್ತು.
ಅದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಎಂದರೆ, ರಿಸರ್ವ್ ಬ್ಯಾಂಕಿನ ಕಟ್ಟಡದಿಂದ ಚಿನ್ನವನ್ನು ವಿಮಾನನಿಲ್ದಾಣಕ್ಕೆ, ವ್ಯಾನಿನಲ್ಲಿ ಸಾಗಿಸಬೇಕಾದ ದೈನೇಸಿ ಸ್ಥಿತಿ ಬಂದೊದಗಿತ್ತು..! 47 ಟನ್ ಚಿನ್ನವನ್ನು RBIಗೆ ಸೇರಿದ ಹಳೆಯ ವ್ಯಾನೊಂದರಲ್ಲಿ 4 ಸೆಕ್ಯುರಿಟಿ ಗಾರ್ಡುಗಳ ರಕ್ಷಣೆಯಲ್ಲಿ ಸಾಗಿಸಲಾಯಿತು. ಆ ವ್ಯಾನು ಎಷ್ಟು ಹಳೆಯದೆಂದರೆ, ದಾರಿ ಮಧ್ಯೆ ಅದರ ಒಂದು ಚಕ್ರ ಪಂಕ್ಚರ್ ಕೂಡಾ ಆಯಿತು..! ಅಷ್ಟೇ ಅಲ್ಲ, 47 ಟನ್ ಚಿನ್ನ ಹೊತ್ತಿದ್ದ ಆ ವ್ಯಾನಿನ ರಕ್ಷಣೆಗೆ ಬಂದಿದ್ದವರು ಪಾಪದ ಕೆಳ ಹಂತದ ಸೆಕ್ಯುರಿಟಿ ಗಾರ್ಡುಗಳು..!!!
ಇಷ್ಟೆಲ್ಲಾ ಪ್ರಯತ್ನಗಳ ನಂತರ, ಅಂತೂ ಬಂಗಾರ ಇಂಗ್ಲೆಂಡ್ ತಲುಪಿತು ಮತ್ತು ಇಂಗ್ಲೆಂಡ್ ಇಂಡಿಯಾಕ್ಕೆ 40.05 ಕೋಟಿಗಳಷ್ಟು ಹಣವನ್ನು ಸಾಲ ಕೊಡಮಾಡಿತು.
ಭಾರತದ ಆರ್ಥಿಕತೆಗೆ ಸಂಬಂಧಪಟ್ಟ ಈ ವಿಷಾದಕರ ಪ್ರಸಂಗವನ್ನು ಈಗ ಯಾಕೆ ನೆನಪಿಸುತ್ತಿದ್ದಾರೆ ಎಂದು ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣವಿಷ್ಟೇ - ಇಂದು ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿದ್ದಾನೆ ಎಂದು ಮೋದೀಜಿಯವರನ್ನು ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಿರುವ ನಾಚಿಕೆಗೆಟ್ಟ ಕಾಂಗ್ರೆಸ್ ನಾಯಕರಿಗೆ ಈ ಮೇಲೆ ಹೇಳಿರುವ ಎಲ್ಲಾ ವಿಷಯಗಳೂ ಬಹಳ ಚೆನ್ನಾಗಿ ತಿಳಿದಿದೆ ಹಾಗೂ ನೆನಪಿನಲ್ಲಿಯೂ ಇದೆ. ನಮ್ಮ ಈ ದಾರಿದ್ರದ ಆರ್ಥಿಕ ಪರಿಸ್ಥಿತಿಗೆ ಗಾಂಧಿ ಕುಟುಂಬದ ಕೊಡುಗೆ ಏನು ಎಂಬುದೂ ಅವರಿಗೆ ತಿಳಿದಿದೆ.... ಈ ಒಂದು ಕುಟುಂಬದ ಸಲುವಾಗಿ, ಕೇವಲ 40 ಕೋಟಿ ಸಾಲಕ್ಕೆ ಇಡೀ ಭಾರತದ 47 ಟನ್ ಚಿನ್ನ ಒತ್ತೆ ಇಡಬೇಕಾದ ಪರಿಸ್ಥಿತಿ ಬಂದಿತ್ತು ಎಂಬುದೂ ಕೂಡಾ ಅವರು ಅರಿಯದ ವಿಷಯವೇನಲ್ಲ...
ಸ್ವಾಭಿಮಾನದಿಂದ ಬದುಕಬೇಕಾದ ಒಂದು ರಾಷ್ಟ್ರಕ್ಕೆ ಇದಕ್ಕಿಂತ ಅವಮರ್ಯಾದೆ ಹಾಗೂ ಇದಕ್ಕಿಂತ ವಿನಾಶಕಾರಿ ಪರಿಸ್ಥಿತಿ ಮತ್ತೊಂದಿದೆಯೇ..? ಕೇವಲ 40 ಕೋಟಿ $ಗಾಗಿ ಇಡೀ ದೇಶವನ್ನೇ ಅಡವಿಟ್ಟವರೇ ಇಂದು ಮೋದಿ ನಮ್ಮ ಅರ್ಥವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾನೆ ಎಂದು ಮಿಥ್ಯಾರೋಪ ಮಾಡುವಾಗ ಸಭ್ಯ ಭಾರತೀಯ ನಾಗರೀಕರು ಹೇಗೆ ತಾನೇ ಸುಮ್ಮನುಳಿದಾರು..?
ಹಿಂದೂಸ್ಥಾನದ 70 ವರ್ಷಗಳ ಇತಿಹಾಸದಲ್ಲಿ, ಕೇವಲ 5 ಅವಧಿಗಳಲ್ಲಿ ಮಾತ್ರ ನಾವು ವಿಶ್ವ ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದೆ ಸರ್ಕಾರ ನಡೆಸಿದ್ದೇವೆ. ಅವು ಯಾವುವೆಂದರೆ;*
2015-16.
2016-17.
2017-18.
2018-19.
2019-20.
ನೆನಪಿರಲಿ - ಈ 5 ವರ್ಷಗಳೂ ಒಬ್ಬ ಚಾಯ್‌ವಾಲಾನ ಆಡಳಿತದ ಅವಧಿಯಾಗಿರುತ್ತದೆ.
                                           🙏💐🙏

ರಿಪೀಟ್ ಟೆಡ್ ಪೋಸ್ಟ್

Comments

Popular Posts